ಸಮಸ್ಯೆ ಆಲಿಸಿದ ಸಚಿವರು, ‘ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಮೃತರ ಕುಟುಂಬದ ನೆರವಿಗೆ ಸರ್ಕಾರ, ಜನಪ್ರತಿನಿಧಿಗಳು ಇದ್ದಾರೆ. ಸಂಬಂಧಪಟ್ಟ ಇಲಾಖೆ ಮೂಲಕ ಧನಸಹಾಯ ಕಲ್ಪಿಸಿಕೊಡಲಾಗುತ್ತದೆ’ ಎಂದು ಭರವಸೆ ನೀಡಿದರು. ಆಗ ಧರಣಿ ನಿರತರು ಪ್ರತಿಭಟನೆ ಹಿಂಪಡೆದರು.ಮೃತ ವ್ಯಕ್ತಿಯ ಪತ್ನಿ ಪೀರದೋಸ್, ಮೂರು ಜನ ಮಕ್ಕಳು, ಅತ್ತೆ ಮೆಹಬುಮಾ, ರೋಹಾನಾ, ಬುನೇರಾ, ಪ್ರಭಾಕರ ಭಜಂತ್ರಿ, ಅಬ್ದುಲ್ ರೆಹಮಾನ, ಆಟೋ ಚಾಲಕ ಮತ್ತು ಮಾಲಿಕರ ಸಂಘದ ಪದಾಧಿಕಾರಿಗಳು ಇದ್ದರು.