ಇಂದಿನ ಜಂಜಾಟದ ಬದುಕಿಗೆ ಧಾರ್ಮಿಕ ತತ್ವ, ಬೋಧನೆಗಳು ಅವಶ್ಯವಾಗಿವೆ. ಮಠ, ಮಂದಿರಗಳಲ್ಲಿ ನಡೆಯುವ ಪುರಾಣ, ಪ್ರಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದರು.ಮಹಾತ್ಮರ ಜೀವನದ ಘಟನೆಗಳನ್ನು ಪುರಾಣ, ಪ್ರವಚನದ ಮೂಲಕ ಇಂದಿನ ಯುವಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಹಂಪಿಯ ಹರೀಶ್ವರ ಕವಿ ರಚಿಸಿದ ಹಾಲುಮತದ ಕುರುಬ ಗೋಲ್ಲಾಳೇಶ್ವರ ಮಹಾಪುರಾಣ ಅರ್ಥಪೂರ್ಣವಾದ ಗ್ರಂಥವಾಗಿದೆ. ಗ್ರಂಥದಲ್ಲಿ ಪ್ರತಿಯೊಂದು ಸನ್ನಿವೇಶ ಮತ್ತು ಮಹಾತ್ಮರ ಪವಾಡಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಪ್ರವಚನಕಾರ ಕೊಟ್ರಯ್ಯಶಾಸ್ತ್ರಿ ನರಗುಂದಮಠ ತಿಳಿಸಿದರು.