ಒಟ್ಟು 11 ಗ್ರಾಮಗಳನ್ನೊಳಗೊಂಡ ಬಿಜ್ಜೂರ ಸುಗ್ಗಿ ನೋಡಲು ಬಹಳ ಆಕರ್ಷಕ. ಸುಗ್ಗಿಗೆ ವಿವಿಧ ರೀತಿಯಲ್ಲಿ ಮೆರಗು ತಂದು ಕೊಡಲು ಸಾಧ್ಯವಾಗಿದೆ. ಸುಗ್ಗಿ ಪ್ರಾರಂಭವಾದ ಮೂರನೇ ದಿನ ಊರಿನ ರಥಬೀದಿಯಿಂದ ಮುಖ್ಯರಸ್ತೆಯಲ್ಲಿ ವಿವಿಧ ಮನರಂಜನೆ ಕಾರ್ಯಕ್ರಮಗಳು ಜನರನ್ನು ಮನಸೂರೆಗೊಂಡವು. ಊರಿನ ಸಮಸ್ಯೆಗಳನ್ನು ಬಿಂಬಿಸುವ ಸ್ತಬ್ದ ಚಿತ್ರ, ಊಳುವ ನೇಗಿಲ ಯೋಗಿ ರೈತ, ನೆಲ ಬಿಟ್ಟು ನಿಂತ ಗಾಂಧೀಜಿ , ಬೆಳೆ ನಷ್ಟವಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ಹೀಗೆ ಹಲವು ಬಗೆಯ ರೂಪಕಗಳು, ಜನಪದ ವೇಷಗಳು ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟವು. ಪ್ರತಿ ವರ್ಷ ಬರುವ ವಿದೇಶಿಗರೂ ರೈತನ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.