ಅರ್ಜಿದಾರ ಪ್ರಕಾಶ್ ಅವರು ಅನುಮತಿ ಇಲ್ಲದೆ ಸ್ಥಿರಾಸ್ತಿ ಖರೀದಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಹಣದ ಮೂಲ ಯಾವುದು ಎಂಬುದನ್ನು ಅವರು ತಿಳಿಸಿಲ್ಲ. ಅವರು ಸರ್ಕಾರಿ ವ್ಯವಸ್ಥೆ (ಲೋಕಾಯುಕ್ತ ಸಂಸ್ಥೆಯ ಹೊಸಪೇಟೆ ಡಿವೈಎಸ್ಪಿ ಮತ್ತು ಕಾನ್ಸ್ಟೆಬಲ್ಗಳನ್ನು) ಬಳಸಿ ಕಲ್ಲಿನ 300 ಕಂಬಗಳನ್ನು ಸಾಗಿಸಿದ್ದಾರೆ. ಆ ಮೂಲಕ ಅಕ್ರಮ ಗಣಿಗಾರಿಕೆ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು.