ರಥಕ್ಕೆ ನಾಲ್ಕು ಗಾಳಿಗಳಿರುವುದು ಸಾಮಾನ್ಯ. ಆದರೆ, ಇಲ್ಲಿನ ರಥಕ್ಕೆ ಆರು ಗಾಲಿಗಳಿರುವುದು ವಿಶೇಷ. ನೂತನ ರಥವನ್ನು ಎಂಟೂವರೆ ಅಡಿ ಎತ್ತರದ ಗಾಲಿಗಳನ್ನು ಅಳವಡಿಸಿ ನಿರ್ಮಿಸಲಾಗಿದೆ. ರಥದ ಗಡ್ಡೆಯು 22 ಅಡಿ ಉದ್ದ, 22 ಅಡಿ ಅಗಲ, 22 ಅಡಿ ಎತ್ತರವಿದ್ದು, ಕಳಸವನ್ನು ಒಳಗೊಂಡು ಅಡಿಯಿಂದ ಮುಡಿಯವರೆಗೆ ಒಟ್ಟು 59 ಅಡಿ ಎತ್ತರವಿದೆ.
ಚನ್ನಗಿರಿ ತಾಲ್ಲೂಕಿನ ಗೊಪ್ಪೆನಹಳ್ಳಿಯ ಚಂದ್ರಾಚಾರಿ ಅವರ ಪುತ್ರರಾದ ವೀರಾಚಾರಿ, ಜಗನ್ನಾಥಾಚಾರಿ ಸೇರಿದಂತೆ 12 ಕುಶಲಕರ್ಮಿಗಳು ಸತತ ಎರಡು ವರ್ಷಗಳ ಕಾಲ ಕೆಲಸ ಮಾಡಿ ರಥವನ್ನು ನಿರ್ಮಿಸಿದ್ದಾರೆ.
ಆರೂವರೆ ಟನ್ ತೂಕದ ಗಟ್ಟಿಮುಟ್ಟಾದ ಕಬ್ಬಿಣದ ಅಚ್ಚನ್ನು ಹೊಸಪೇಟೆಯ ಉಕ್ಕಿನ ಕಾರ್ಖಾನೆ ಯಲ್ಲಿ ಸಿದ್ಧಪಡಿಸಿ ಅಳವಡಿಸಲಾಗಿದೆ. ಗಾಲಿಗಳನ್ನು ಕಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಅವುಗಳಿಗೂ ಕಬ್ಬಿಣದ ಹಳಿಗಳನ್ನು ಕಟ್ಟಲಾಗಿದೆ. ತೇಗ, ಹೊನ್ನೆ ಕಟ್ಟಿಗೆಯನ್ನು ಬಳಸಿ ರಥದ ಗಡ್ಡೆಯನ್ನು ನಿರ್ಮಿಸಲಾಗಿದೆ.
ಬ್ರೇಕ್, ಸ್ಟೇರಿಂಗ್ ವ್ಯವಸ್ಥೆ: ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರು ಉತ್ಸಾಹದಲ್ಲಿ ರಥವನ್ನು ಜೋರಾಗಿ ಎಳೆಯುವುದು ಸಾಮಾನ್ಯ. ಈ ವೇಳೆ ಅದನ್ನು ನಿಯಂತ್ರಿಸಲು, ಅಪಾಯಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲು ರಥಕ್ಕೆ ‘ಬ್ರೇಕ್ ಸಿಸ್ಟಂ’(ವೇಗ ನಿಯಂತ್ರಕ ವ್ಯವಸ್ಥೆ) ಹಾಗೂ ‘ಸ್ಟೇರಿಂಗ್’ ಅಳವಡಿಸಲಾಗಿದೆ.
ಭಕ್ತರ ಸಹಕಾರ: ‘ನೂತನ ರಥಕ್ಕೆ ಸುಮಾರು ₹ 2 ಕೋಟಿ ವೆಚ್ಚ ಮಾಡ ಲಾಗಿದೆ. ಗಟ್ಟಿಮುಟ್ಟಾದ ಕಬ್ಬಿಣದ ಅಚ್ಚು ಹಾಕಿ ನಿರ್ಮಿಸಲಾಗಿದೆ. ನೂತನ ರಥವು ಕೆತ್ತನೆಯಲ್ಲಿ ಕಲಾತ್ಮಕವಾಗಿ ಹಾಗೂ ಸುಂದರವಾಗಿ ಮೂಡಿ ಬಂದಿದೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರಥ ಉದ್ಘಾಟಿಸಲಿದ್ದಾರೆ.
ಇದೇ ವೇಳೆ ಚಿಗಟೇರಿ ವೃತ್ತದ ಲ್ಲಿರುವ ಮಹಾಧ್ವಾರದ ಉದ್ಘಾಟನೆಯೂ ನೆರವೇರಲಿದೆ. ಭಕ್ತರು ಉದಾರವಾಗಿ ದೇಣಿಗೆ ನೀಡಿದ್ದಾರೆ. ಭಕ್ತರ ಸಹ ಕಾರದಿಂದ ಕೈಗೂಡಿದೆ’ ಎಂದು ಶಿವನಾರದ ಮುನಿ ಸೇವಾ ಟ್ರಸ್ಟ್ನ ಅಧ್ಯಕ್ಷ ಅಣಬೇರು ರಾಜಣ್ಣ ಮಾಹಿತಿ ನೀಡಿದರು.
***
ರಥೋತ್ಸವ: ಏ. 17ರ ಸೋಮವಾರ, ಸಮಯ: ಸಂಜೆ 4.30ಕ್ಕೆ ಮೂಲಾ ನಕ್ಷತ್ರದಲ್ಲಿ ನೂತನ ರಥ ಉದ್ಘಾಟನೆ: ರಥವೇರುವ ಮೂಲಕ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಶಿವನಾರದಮುನಿ ಮಹಾದ್ವಾರ ಉದ್ಘಾಟನೆ: ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ನೂತನ ಬ್ರಹ್ಮರಥ ಕಳಸಾರೋಹಣದ ಉದ್ಘಾಟನೆ: ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ
ಸಭಾ ಕಾರ್ಯಕ್ರಮ: ಮಧಾಹ್ನ 12.30ರಿಂದ
ನೇತೃತ್ವ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಅಧ್ಯಕ್ಷತೆ: ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ.ಚನ್ನಬಸವನಗೌಡ್ರು ಸಾಸ್ವೆಹಳ್ಳಿ ಸಾವಕ್ಕನ ನೂತನ ದೇವಸ್ಥಾನಕ್ಕೆ ಶಂಕುಸ್ಥಾಪನೆ ಶಾಸಕ ಶಾಮನೂರು ಶಿವಶಂಕರಪ್ಪ.
ಸಭಾ ಕಾರ್ಯಕ್ರಮ ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಾರದಮುನಿ ಇತಿಹಾಸ: ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ.
ಸ್ಥಳ: ದೇವಸ್ಥಾನ ಮುಂದಿನ ಆವರಣ, ಚಿಗಟೇರಿ
***
ಅಂದು ನಿವಾರಣೆಯಾಗಿದ್ದ ಕ್ಷಾಮ
ಭೈರೇಶರು ಶಿವನಾರದ ಮುನಿಯಾಗಿ ಚಿಗಟೇರಿ ಗ್ರಾಮದ ಕ್ಷಾಮ ನೀಗಿದ್ದರು, ಪವಾಡ ಗೈದಿದ್ದರು ಎಂಬುದು ಇತಿಹಾಸ. ಅಂದು ಕ್ಷಾಮದಿಂದ ಕಂಗಾಲಾಗಿದ್ದ ಜನರ ಬಾಳಿಗೆ ಬೆಳಕಾಗಿ ಬಂದಿದ್ದ ನಾರದ ಮುನಿಗೆ, ಇಂದು ನಾಡಿನೆಲ್ಲೆಡೆ ಲಕ್ಷಾಂತರ ಭಕ್ತರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.