ಕಡೂರ ತಾಲ್ಲೂಕು ಪಂಚಾಯ್ತಿ ಸದಸ್ಯ ರೇವಣೆಪ್ಪ ಎರಳ್ಳಿ ಮಾತನಾಡಿ, ‘ಮೂರು ತಿಂಗಳ ಹಿಂದೆ ನಾವೇ ಸ್ವತಃ ಜಾಕ್ವೆಲ್ ಬಳಿ ಹೂಳು ತೆಗೆಯುತ್ತಿದ್ದೇವು. ಆಗ ಬಂದಿದ್ದ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಹೂಳು ತೆಗೆಸುವುದಾಗಿ ತಿಳಿಸಿದ್ದರು. ಆದರೆ ಇಂದಿಗೂ ತೆಗೆಯಲು ಕ್ರಮ ವಹಿಸಿಲ್ಲ’ ಎಂದು ಆರೋಪಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ನಟರಾಜ ನಂದೀಹಳ್ಳಿ, ರಮೇಶ ತುಮ್ಮಿನಕಟ್ಟಿ, ನಾಗರಾಜ ಬಾರ್ಕಿ, ಬಸವರಾಜ ಬ್ಯಾಡ ಗೌಡ್ರ, ತಿಮ್ಮಣ್ಣ ಮಾಜಿಗೌಡ್ರ, ರುದ್ರಗೌಡ ಕರೇಗೌಡ್ರ, ವೀರನಗೌಡ ಇದ್ದರು.