ಮಹಾಲಿಂಗೇಶ್ವರ ಮಠದಿಂದ ನಂದಿಕೋಲು, ಕರಡಿ ವಾದ್ಯಗಳ ಮೇಳದೊಂದಿಗೆ ಮಲ್ಲಿಕಾರ್ಜುನ ದೇವ ಸ್ಥಾನಕ್ಕೆ ಬಂದ ಮಹಾಲಿಂಗೇಶ್ವರ ಶಿವ ಯೋಗಿ ರಾಜೇಂದ್ರ ಶ್ರೀಗಳು ಕಂಬಿ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿದರು. ನಂತರ ಕರಡಿ ಮಜಲು, ನಂದಿಕೋಲು ವಾದ್ಯಗಳ ಮೇಳಗಳೊಂದಿಗೆ ಮೆರ ವಣಿಗೆ ಮೂಲಕ ಸಂಪ್ರದಾಯದಂತೆ ಸ್ಮಶಾನದಲ್ಲಿ ಹಾಯ್ದು ಚನ್ನಗಿರೀಶ್ವರ ದೇವಸ್ಥಾನಕ್ಕೆ ಕರೆತರಲಾಯಿತು. ಮುಂಜಾನೆ 10 ರಿಂದ ಸಂಜೆ 7ರವರೆಗೆ ಚನ್ನಗಿರೀಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಮಲ್ಲಯ್ಯನಿಗೆ ಪೂಜೆ ಸಲ್ಲಿಸಿದರು.