ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ನಡಿಗೆ ದಲಿತರ ಕಡೆಗೆ’

Last Updated 17 ಏಪ್ರಿಲ್ 2017, 7:15 IST
ಅಕ್ಷರ ಗಾತ್ರ

ಕಂಪ್ಲಿ:   ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಜನ್ಮದಿನವನ್ನು ಅಭಿಮಾನದಿಂದ ಆಚರಣೆ ಮಾಡದೆ ಕೇವಲ ಓಟ್‌ ಬ್ಯಾಂಕ್‌ಗಾಗಿ ಆಚರಣೆ ಮಾಡುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸುವಂತೆ ಇಲ್ಲಿಯ ಬಿಜೆಪಿ ನಗರ ಘಟಕ ಅಧ್ಯಕ್ಷ ಜಿ. ಸುಧಾಕರ ಕರೆ ನೀಡಿದರು.

ಎಂ.ಡಿ ಕ್ಯಾಂಪ್‌ ಸಿಂಧೊಳ್ಳು ಕಾಲೊನಿಯಲ್ಲಿ ಬಿಜೆಪಿ ನಗರ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ದಲಿತರ ಕಡೆಗೆ’ ಕಾ ಮಾತನಾಡಿದರು.ಬಿಜೆಪಿ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಬ್ರಹ್ಮಯ್ಯ ಮಾತನಾಡಿ, ರಾಜ್ಯ ಸರ್ಕಾರ ದಲಿತ ಹಿಂದುಳಿದ ವರ್ಗದ ಜನರ ಅಭಿವೃದ್ಧಿ ಕಡೆಗಣಿಸುತ್ತಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯರ್ರಂಗಳ್ಳಿ ತಿಮ್ಮಾರೆಡ್ಡಿ, ಕ್ಷೇತ್ರ ಅಧ್ಯಕ್ಷ ಬಿ. ಮಹೇಶಗೌಡ, ಕೊಡಿದಲ ರಾಜು, ಬಿ. ಸಿದ್ದಪ್ಪ, ಜಿ. ರಾಮಣ್ಣ, ವಾಲ್ಮೀಕಿ ರಘು, ಎನ್. ರಾಮಾಂಜನೇಯಲು, ಸಣ್ಣ ಹುಲುಗಪ್ಪ, ಸಿ.ಡಿ. ಕುಮಾರಸ್ವಾಮಿ, ನಾಗೇಂದ್ರ, ದೇವೇಂದ್ರ, ಕೆ. ಜ್ಯೋತಿ, ಸಿ.ಎಂ.ಡಿ. ರಫಿಕ್, ಎನ್. ಬುಜ್ಜಿಕುಮಾರ್, ಅಬ್ದುಲ್ ರವೂಫ್,  ಬಿ.ಕೆ. ವಿರೂಪಾಕ್ಷಿ, ಯು. ರಾಮದಾಸ್  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT