ಯಲ್ಲಟ್ಟಿ- ಹಿಪ್ಪರಗಿ ರಸ್ತೆಯ ಮಧ್ಯೆ ಕೆಲವರು ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಯುವಕರ ಮನವೊಲಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರುದಸಂಸ ಮುಖಂಡರಾದ ರವಿ ಸುತಾರ, ಪರಮಾನಂದ ಕಾಂಬಳೆ, ಶಿವನಿಂಗ ಪಡಸಾಲಿ, ಶಂಕರ ಹೊಸಮನಿ, ಸದಾಶಿವ ದೊಡಮನಿ, ಧರ್ಮಣ್ಣ ಯಲ್ಲಟ್ಟಿ, ಹಣಮಂತ ಕಾಂಬಳೆ, ಮೂಕಪ್ಪ ಆಸಂಗಿ, ತುಕಾರಾಮ ಬನ್ನೂರ, ರಮೇಶ ಕಾಂಬಳೆ, ವಿಜಯ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.