ರಾಜ್ಯದ ಹಲವೆಡೆ ರಸ್ತೆ ವಿಸ್ತರಣೆಗಾಗಿ ಸಾವಿರಾರು ಮರಗಳ ಮಾರಣಹೋಮ ನಡೆಯುತ್ತಿದೆ. ಹಲವಾರು ವರ್ಷಗಳಿಂದ ಜನರಿಗೆ ನೆರಳು ನೀಡುತ್ತಿದ್ದ ಮರಗಳು ನಾಶವಾಗುತ್ತಿವೆ. ರಸ್ತೆ ವಿಸ್ತರಣೆ ಅನಿವಾರ್ಯ. ಆದರೆ ಕಡಿದ ಮರಗಳಿಗೆ ಪರ್ಯಾಯವಾಗಿ ಹೊಸ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಆಗಬೇಕು.
ರಸ್ತೆ ನಿರ್ಮಿಸಿದ ನಂತರ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವ ಜವಾಬ್ದಾರಿಯನ್ನೂ ರಸ್ತೆಯ ಟೆಂಡರ್ ಪಡೆದ ಗುತ್ತಿಗೆದಾರರಿಗೇ ನೀಡಬೇಕು. -ಅನಿಲ್ ಕುಮಾರ್ ಜಿ.ಎಮ್., ದಾವಣಗೆರೆ