ಶ್ರೀವೀರಭದ್ರಸ್ವಾಮಿ ದೇವರ ಜಾತ್ರಾ ಮಹೋತ್ಸವ ಏ.19ರಂದು ಮಾಗಡಿ ರಸ್ತೆ, ಯಶವಂತಪುರ ಹೋಬಳಿಯ ಕನ್ನಲ್ಲಿಯಲ್ಲಿ ನಡೆಯಲಿದೆ.
ಚೋಳರ ಆಳ್ವಿಕೆ ಕಾಲದ ಈ ದೇವಸ್ಥಾನದಲ್ಲಿ ಅಂದಿನಿಂದಲೂ ಇಂದಿನವರೆಗೂ ದೇವರ ಉತ್ಸವ, ಅಗ್ನಿಕೊಂಡ, ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.
(ಏ.19) ಬುಧವಾರ ಬೆಳಿಗ್ಗೆ ನೂರಾರು ಮಹಿಳೆಯರು ಬೆಲ್ಲ, ತಂಬಿಟ್ಟು, ಹೂವಿನ ಆರತಿಯೊಂದಿಗೆ ಮೆರವಣಿಗೆಯಲ್ಲಿ ಬಂದು ಪೂಜೆ ಸಲ್ಲಿಸುವರು. ಬೆಳಿಗ್ಗೆ 7.30ಕ್ಕೆ ಅಗ್ನಿಕೊಂಡ ಹಾಯುವುದು, 11.30ಕ್ಕೆ ರಥೋತ್ಸವ, ಸಾಂಸ್ಕೃತಿಕ ಉತ್ಸವ, ಪ್ರಸಾದದ ವ್ಯವಸ್ಥೆ ಇರುತ್ತದೆ. ಸಂಜೆ 6ಕ್ಕೆ ಹಲವು ಜನಪದ ಕುಣಿತ, ನಂತರ ವೀರಭದ್ರಸ್ವಾಮಿ ಪಲ್ಲಕ್ಕಿ ಉತ್ಸವ ನೆರವೇರಲಿದೆ.