ಚೆನ್ನೈ: ಕರ್ನಾಟಕವೂ ಸೇರಿದಂತೆ 8 ರಾಜ್ಯಗಳಲ್ಲಿ ಮೇ 14 ರಿಂದ ಪೆಟ್ರೋಲ್ ಪಂಪ್ಗಳು ಭಾನುವಾರ ಕಾರ್ಯ ನಿರ್ವಹಿಸುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಉಳಿತಾಯ ಕರೆಗೆ ಅನುಗುಣವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪೆಟ್ರೋಲ್ ಪಂಪ್ ಮಾಲೀಕರ ಸಂಘ ತಿಳಿಸಿದೆ.
‘ಕೆಲ ವರ್ಷಗಳ ಹಿಂದೆ ಭಾನುವಾರ ಪೆಟ್ರೋಲ್ ಪಂಪ್ಗಳಿಗೆ ರಜೆ ನೀಡುವ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಮನವಿ ಮೇರೆಗೆ ಈ ನಿರ್ಧಾರ ಕೈಬಿಡಲಾಗಿತ್ತು’ ಎಂದು ಪೆಟ್ರೋಲ್ ವಿತರಕರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ತಿಳಿಸಿದ್ದಾರೆ. ಒಕ್ಕೂಟದ ಈ ನಿರ್ಧಾರವನ್ನು ತೈಲ ಮಾರಾಟ ಸಂಸ್ಥೆಗಳು ಬೆಂಬಲಿಸಿವೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ‘ನಮ್ಮ ನಿರ್ಧಾರವನ್ನು ಶೀಘ್ರದಲ್ಲಿಯೇ ಅವುಗಳ ಗಮನಕ್ಕೆ ತರಲಾಗುತ್ತಿದೆ. ತುರ್ತು ಸಂದರ್ಭದ ಅಗತ್ಯ ಪೂರೈಸಲು ಪೆಟ್ರೋಲ್ ಪಂಪ್ಗಳಲ್ಲಿ ಭಾನುವಾರ ಒಬ್ಬ ನೌಕರ ಕರ್ತವ್ಯದ ಮೇಲೆ ಇರುತ್ತಾನೆ ’ ಎಂದು ಹೇಳಿದ್ದಾರೆ.
ಪರಿಸರ ಉಳಿಸಲು ಇಂಧನ ಬಳಕೆಗೆ ಕಡಿವಾಣ ವಿಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ತಮ್ಮ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡಿದ್ದರು.
ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿನ ಪೆಟ್ರೋಲ್ ಪಂಪ್ಗಳು ಭಾನುವಾರ 24 ಗಂಟೆಗಳ ಕಾಲ ಬಾಗಿಲು ಹಾಕಲಿವೆ.