ಗದುಗಿನ ಮುಂಡರಗಿ, ಹುಲಕೋಟಿ, ಕುರ್ತಕೋಟಿ, ರೋಣ, ಡಂಬಳ, ಶಿರ ಹಟ್ಟಿ ಹಾಗೂ ಲಕ್ಷ್ಮೇಶ್ವರ ಸೇರಿ ವಿವಿಧ ಕಡೆಗಳಲ್ಲಿ ಮಾವಿನ ತೋಟಗಳಿವೆ. ಬದಾಮಿ (ಅಲ್ಫಾನ್ಸೋ), ದಶೇರಿ, ತೋತಾಪುರಿ, ಮಲ್ಲಿಕಾ ತಳಿಯ ಮಾವಿನ ಗಿಡಗಳನ್ನು ಬೆಳೆಯಲಾಗಿದೆ.‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣು ಗಳ ಗಾತ್ರ ಸ್ವಲ್ಪ ಚಿಕ್ಕದಾಗಿವೆ. ಮಳೆಯ ಕೊರತೆ, ನೀರಿನ ಅಭಾವದಿಂದ ಮಾವಿನ ಗಿಡಗಳಿಗೆ ಪ್ರಮುಖವಾಗಿ ತೇವಾಂಶದ ಕೊರತೆ ಅಧಿಕವಾಗಿ ಕಾಡಿತು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿ ವೈ.ಎಚ್.ಜಾಲವಾಡಗಿ.