ತಾಪಂ ಇಒ ಡಾ.ಎಸ್.ಎಚ್.ಅಂಗಡಿ, ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಮಾತ್ರ ಸಮಸ್ಯೆ ಬಂದಿವೆ. ತಕ್ಷಣ ಸ್ಪಂದಿಸಿ ಕ್ರಮ ಕೈಗೊಂಡಿದ್ದೇವೆ. ಬಹುತೇಕ ಶುದ್ಧ ನೀರಿನ ಘಟಕಗಳು ಸರಿಯಾಗಿವೆ. ನೀರಿನ ಸರಬರಾಜು ಕಾಮಗಾರಿಗಳನ್ನು ತುರ್ತಾಗಿ ಮಾಡಬೇಕು ಎಂದರು.ಇಳಕಲ್ ವಿಶೇಷ ತಹಶೀಲ್ದಾರ್ ಗ್ರೇಡ್–2 ತಹಶೀಲ್ದಾರ್ ಆನಂದ ಕೋಲಾರ, ಜಿ.ಎಂ.ಕುಲಕರ್ಣಿ, ಇಳಕಲ್ ನಗರ ಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಹುನಗುಂದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಹೆಸ್ಕಾಂ ಎಇಇ ಪ್ರಕಾಶ, ಶಾಖಾಧಿಕಾರಿಗಳು, ಪಿಡಿಒಗಳು ಹಾಜರಿದ್ದು ಮಾಹಿತಿ ಒದಗಿಸಿದರು.