ದಾವಣಗೆರೆಯಲ್ಲಿ ಇತ್ತೀಚೆಗೆ ತಮ್ಮ ಮೇಲೆ ನಡೆದ ಬಲಪಂತೀಯ ಯುವಕರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಆ ಘಟನೆ ಬಹಳ ಬೇಸರ ಉಂಟು ಮಾಡಿದೆ. ನನ್ನ ಮೇಲೆ ದಾಳಿ ನಡೆಸಿದ ಹುಡುಗರ ಮೇಲೆ ಬೇಸರ, ದುಃಖವಿದೆ. ಅವರು ನನ್ನ ಬಗ್ಗೆ ಮತ್ತು ನನ್ನ ಕೃತಿಗಳ ಬಗ್ಗೆ ಓದಿಕೊಂಡಿದ್ದರೆ ಆ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಟೀಕಾಗ್ರಂಥ ಪ್ರಕಟಿಸಿ ವೈಚಾರಿಕಾ ವಾಗ್ವಾದ ನಡೆಸಲು ಅವಕಾಶವಿತ್ತು. ಆದರೆ, ಯಾರದೋ ಕುಮ್ಮಕ್ಕಿಗೆ, ಪ್ರಚೋದನೆಗೆ ಒಳಗಾಗಿ ಕೃತ್ಯ ಎಸಗಿದ್ದಾರೆ. ಅವರಿಗೆ ಪ್ರಚೋದನೆ ನೀಡಿರುವ ಜನರ ಬಗ್ಗೆ ನನಗೆ ಆಕ್ರೋಶವಿದೆ’ ಎಂದರು.