ವನ್ಯಜೀವಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಇರುವುದರಿಂದ ಅದು ನಿಷೇಧಿತ ವಲಯವಾಗಿದೆ. ಆದರೂ ಭ್ರಷ್ಟಾಚಾರದ ಮೂಲಕ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಈ ಕುರಿತು ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಸಂಘಟನೆಯ ಮುಖಂಡ ಫಜ್ಲುದ್ದೀನ್, ಯೋಗೇಂದ್ರ ಎ.ಜಿ., ಬಾಷಾ, ನಸ್ರುತ್, ಅಣ್ಣಪ್ಪ, ಪ್ರಭು, ಸರಸ್ವತಿ, ನಾರಾಯಣಮೂರ್ತಿ ಮನವಿ ಸಲ್ಲಿಸಿದರು.