ಸಾಮಾನ್ಯ ಸಭೆಯಲ್ಲಿ ಪ್ರತಿಬಾರಿ ಕೇಳಿ ಬರುತ್ತಿದ್ದ ಸ್ವಚ್ಛತೆ, ನೀರು ಸರಬರಾಜು, ಮೂಲ ಸೌಕರ್ಯ ಕುರಿತ ವಿಷಯಗಳು ಚರ್ಚೆಯಾಗದೆ ಉಳಿದವು. ನಗರದ ಕೊಳೆಗೇರಿಗಳಲ್ಲಿ ವಾಸವಿರುವ ಬಡಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ವಾರ್ಡ್ಗಳ ಪುನರ್ವಿಂಗಡಣೆ, ಬೀದಿ ದೀಪ ಅಳವಡಿಕೆ ಸೇರಿದಂತೆ ಯಾವುದೇ ಗಂಭೀರ ವಿಷಯಗಳು ಚರ್ಚೆಯಾಗಲಿಲ್ಲ.ನಗರಸಭೆ ಉಪಾಧ್ಯಕ್ಷೆ ಮಹದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಕೆ.ರವಿ ಹಾಗೂ ಸದಸ್ಯರಿದ್ದರು.