‘ಭೀಮಾ ಏತ ನೀರಾವರಿ ಹಿನ್ನೀರಿಗೆ ಒಳಪಡುವ 10 ಗ್ರಾಮದ ಜನರಿಗೆ ಅವರ ಮನೆಗಳ ಅಂದಾಜು ವೆಚ್ಚದ ಪ್ರಕಾರ ₹ 1 ಲಕ್ಷ ದಿಂದ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಅವರು ಮನೆ ಕಟ್ಟಿಕೊಳ್ಳಬೇಕು. ನಾವು ಸ್ಥಳಾಂತರ ವೆಚ್ಚ ಕೊಡುತ್ತೇವೆ’ಎಂದರು. ‘ಇಲ್ಲಿ ನಾವು ಈಗಾಗಲೇ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕೋಣೆ, ದೇವಾಲಯ, ಮಸೀದಿ, ಬಸ್ ನಿಲ್ದಾಣ, ಅಂಗನವಾಡಿ ಕಟ್ಟಡ, ಸಮುದಾಯ ಭವನ ಎಲ್ಲವೂ ಮಾಡಿದ್ದೇವೆ’ ಎಂದರು.