ಯಾದಗಿರಿ: ನಗರದ 19ನೇ ವಾರ್ಡ್ನಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ನಗರಸಭೆ ಪೌರಾಯುಕ್ತ ಮಲ್ಲಿಕಾರ್ಜುನ್ ಅವರಿಗೆ ವಾರ್ಡ್ ನಾಗರಿಕರು ಬುಧವಾರ ಮನವಿ ಸಲ್ಲಿಸಿದರು.‘ವಾರ್ಡ್ನಲ್ಲಿ ಕುಡಿಯುವ ನೀರು, ಚರಂಡಿ, ಶೌಚಾಲಯ, ಸ್ವಚ್ಛತೆ ಸಮಸ್ಯೆಗಳು ನಿವಾರಣೆಯಾಗಿಲ್ಲ. ಬಡಾವಣೆಗೆ ಕೂಡಲೇ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಸಾರ್ವಜನಿಕರಿಗೆ ಶೌಚಾಲಯ ನಿರ್ಮಿಸಿಕೊಡಬೇಕು. ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲು ತಕ್ಷಣ ವ್ಯವಸ್ಥೆ ಮಾಡಬೇಕು.
ಕೊಳವೆಬಾವಿ ದುರಸ್ತಿ ಮಾಡಬೇಕು. ಆಗದಿದ್ದಲ್ಲಿ ಹೊಸ ಬೋರ್ವೆಲ್ ಕೊರೆಯಿಸಬೇಕು’ ಎಂದು ನಿವಾಸಿಗಳು ಒತ್ತಾಯಿಸಿದರು. ಎಸ್ಯುಸಿಐಸಿ ಜಿಲ್ಲಾ ಸಮಿತಿ ಸದಸ್ಯೆ ಡಿ.ಉಮಾದೇವಿ, ರಾಮಲಿಂಗಪ್ಪ, ನಗರಸಭೆ ಸದಸ್ಯ ಮನ್ಸೂರ್, ಫರಿದಾ ಬೇಗಂ, ಭಾನು ಬೇಗಂ, ಮಹಿಬೂಬ್, ಅಮಿನಾ, ಮೋಸಿನ್, ಖಜಾಬಿ, ನವಾಜ್, ಫಾತಿಮಾ ಇದ್ದರು.