ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ಕಾಡುಗಳ್ಳರು ಮತ್ತು ವನ್ಯಜೀವಿ ಬೇಟೆಗಾರರಿಗೆ ಸಿಂಹಸ್ವಪ್ನವಾಗಿರುವ ಶ್ವಾನ ‘ರಾಣಾ’ನನ್ನು ‘ಪ್ರಿನ್ಸ್’ ಹುಲಿಯ ಸಾವಿನ ರಹಸ್ಯ ಪತ್ತೆಹಚ್ಚಲು ಅರಣ್ಯ ಇಲಾಖೆ ಬಳಸಿಕೊಳ್ಳುತ್ತಿದೆ.ಕಳೆದ ವಾರ ಪ್ರವಾಸಿಗರ ನೆಚ್ಚಿನ ಹುಲಿ ‘ಪ್ರಿನ್ಸ್’ ಸಾವಿಗೀಡಾಗಿತ್ತು. ಬೇಟೆಗೆ ಇಟ್ಟಿದ್ದ ಸಿಡಿಮದ್ದಿನಿಂದ ಮೃತಪಟ್ಟಿದೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರೆ, ಹುಲಿ ಸಹಜವಾಗಿ ಸಾವನ್ನಪ್ಪಿದೆ.