ಬಳಿಕ ಎಚ್.ವಿ. ಮಹದೇವಪ್ರಸಾದ್ ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ ಆದಿಜಾಂಬವ ಸಮುದಾಯದ ಸ್ಮಶಾನಭೂಮಿ ಅಳತೆ ಮಾಡಲಾಗಿದೆ. ಸ್ಮಶಾನಭೂಮಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವನಪುರ ರಾಜಶೇಖರ್ ಮಾತನಾಡಿ, ‘ಕಾಗಲವಾಡಿ ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸ್ಮಶಾನಕ್ಕಾಗಿ ಸರ್ಕಾರದಿಂದ 2.25 ಎಕರೆ ಜಮೀನು ನೀಡಿತು. ಈ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಜಿಲ್ಲಾಧಿಕಾರಿ ಅವರು ಸ್ಪಂದಿಸಿ ಸ್ಮಶಾನ ಭೂಮಿ ಅಳತೆ ಮಾಡಿಸುತ್ತಿರುವುದು ಸಂತಸವಾಗಿದೆ’ ಎಂದರು
ಮುಖಂಡರಾದ ಬಸವರಾಜು, ತಿಬ್ಬಯ್ಯ, ಕೃಷ್ಣ, ಡಿಗ್ಗಯ್ಯ, ಜಯಶಂಕರ್, ಮಹದೇವ, ಲಿಂಗಣ್ಣ, ಪ್ರಕಾಶ್, ಬಸವಣ್ಣ ಹಾಜರಿದ್ದರು.