ಸರ್ಕಾರದ ನಿಯಮಾವಳಿ ಯಂತೆಯೇ ಆಡಳಿತ ಮಂಡಳಿಯಿಂದ ನೇಮಕಗೊಂಡು, ವೃತ್ತಿಯಲ್ಲಿ ಇತರ ಸರ್ಕಾರೀ ನೌಕರರಂತೆಯೇ ಕರ್ತವ್ಯ ನಿರ್ವಹಿಸಿ, ನಿವೃತ್ತಿಯಾದಾಗ ಮಾತ್ರ ತಿಂಗಳ ಕೊನೆಯ ಸಂಬಳದೊಂದಿಗೆ ಅಸಹಾಯಕರಾಗಿ ಬರಿಗೈಯಲ್ಲಿ ಮನೆಗೆ ತೆರಳಬೇಕಾದ ಶೋಚನೀಯ ಪರಿಸ್ಥಿತಿ ಈ ನೌಕರರದ್ದಾಗಿದೆ. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯದ ಭದ್ರತೆಯ ದೃಷ್ಟಿಯಲ್ಲಿ ನೀಡುತ್ತಿರುವ ಪಿ.ಈ ಮತ್ತು ಇ.ಎಸ್.ಐ ಮುಂತಾದ ಸೌಲಭ್ಯಗಳೂ ಈ ನೌಕರರಿಗೆ ದೊರಕುತ್ತಿಲ್ಲ. ಈ ಕಾರಣ ದಿಂದ ಪಿಂಚಣಿಗಾಗಿ ತಮ್ಮ ನ್ಯಾಯ ಯುತ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ಗಮನವನ್ನು ಸೆಳೆಯಲು ಮೌಲ್ಯಮಾಪನ ಕಾರ್ಯದಲ್ಲಿ ಕಪ್ಪುಪಟ್ಟಿ ಧರಿಸಿ, ತಮ್ಮ ಕರ್ತವ್ಯವನ್ನು ನೌಕರರು ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.