‘ಪಶ್ಚಿಮಘಟ್ಟ ಉಳಿದರೆ ಕರ್ನಾಟಕ ರಾಜ್ಯ ಉಳಿದಂತೆ ಎಂಬುದು ಸತ್ಯ. ಇಲ್ಲಿರುವ ಅರಣ್ಯಗಳು ಉಳಿಯಬೇಕು. ತೋಟಗಳು ಬೆಳೆಯಬೇಕು. ಅಭಯಾ ರಣ್ಯದಲ್ಲಿ ಒಕ್ಕಲೆಬ್ಬಿಸುವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ತೆಕ್ಕೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೊಚ್ಚವಳ್ಳಿ ನಾಗೇಶ್, ಸದಸ್ಯ ರಾದ ಪ್ರೇಮ್ ಕುಮಾರ್, ಕೃಷಿಕ ಹಾಲಪ್ಪಗೌಡ, ಎಪಿಎಂಸಿ ಅಧ್ಯಕ್ಷ ರಮೇಶ್ಭಟ್, ಗ್ರಾಮಸ್ಥರಾದ ಟಿ.ಟಿ. ಕಳಸಪ್ಪ, ತೆಕ್ಕೂರು ರಾಜಶೇಖರ್ ಉಪಸ್ಥಿತರಿದ್ದರು.