‘ಫಲಿತಾಂಶ ಪ್ರಕಟವಾದ ನಂತರ ಮರುಮೌಲ್ಯಮಾಪನ ಆಗದಂತೆ ವಿಶ್ವವಿದ್ಯಾಲಯ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಯನ್ನು ದೂರ ಮಾಡಬೇಕಾದರೆ ಕೂಡಲೇ ಫಲಿತಾಂಶ ಪ್ರಕಟಿಸಬೇಕು. ವಾರದೊಳಗೆ ಎಲ್ಲ ಸೆಮಿಸ್ಟರ್ಗಳ ಫಲಿತಾಂಶ ಪ್ರಕಟಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಜೊತೆಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಕಾರ್ಯಕರ್ತರಾದ ಚೇತನ ನಂದಿಹಳ್ಳಿ, ಸಚಿನ ರಾಯಭಾಗಕರ, ಶ್ರವಣ ಹುಣಸಗಿ, ಶಿವುಗೌಡ, ಶ್ರೀನಿವಾಸ, ಸನ್ಮತಿ, ರಿತೇಶ, ಮಹಾಲಕ್ಷ್ಮಿ, ಆರತಿ, ಅನನ್ಯ ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.