ಉರಿ ಬಿಸಲನ್ನು ಲೆಕ್ಕಿಸದೆ, ಊಟ ಉಪಾಹಾರ ಮಾಡದೇ ಕೇವಲ ಚಹಾ ಕುಡಿದು ನಡೆಯುತ್ತಲೇ 105 ಕಿ.ಮಿ. ನಷ್ಟು ನಡೆದರೂ ಶಿವಪ್ಪನ ಉತ್ಸಾಹ ಕುಂದಿಲ್ಲ. 62 ರ ಈ ವಯಸ್ಸಿನಲ್ಲಿಯೂ ಹುರುಪಿನಿಂದ ಯುವಕರಿಗೆ ಮಾದರಿ ಯಾದ ಶಿವಪ್ಪನ ಸಾಹಸಕ್ಕೆ ಗ್ರಾಮಸ್ಥರು ಹುರುಪಿನಿಂದ ಗುಲಾಲು ಹಾಕಿ ಸ್ವಾಗತಿಸಿ ಗೌರವಿಸಿದರು. ಈ ಸಂಭ್ರಮದಲ್ಲಿ ಉಪ ತಹಶೀಲ್ದಾರ್ ಎಂ.ಎ. ಕಿತ್ತೂರ, ರೈತನ ಈ ಉತ್ಸಾಹ ಹಾಗೂ ಸ್ಪರ್ಧಾ ಮನೋಭಾವ ಎಲ್ಲರಿಗೂ ಹರ್ಷ ಮೂಡಿಸಿದೆ ಎಂದರು.