ಶಿಗ್ಗಾವಿ: ಯುವಕರು ತಮ್ಮ ಸ್ವಂತ ಏಳ್ಗೆ ಜೊತೆಗೆ ದೇಶದ ಆರ್ಥಿಕ ಗುಣಮಟ್ಟ ಹೆಚ್ಚುಸುವುದು ಅವಶ್ಯವಿದ್ದು, ಹೀಗಾಗಿ ಪ್ರಜ್ಞಾವಂತರು, ಜ್ಞಾನವಂತರು ಹೆಚ್ಚು, ಹೆಚ್ಚಾಗಿ ಉದ್ಯಮಶೀಲತೆಗೆ ಆದ್ಯತೆ ನೀಡಬೇಕು ಎಂದುಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಡಾ.ಎಸ್.ಎಚ್. ವೀರಣ್ಣ ಹೇಳಿದರು. ಪಟ್ಟಣದ ರಂಭಾಪುರಿ ಪದವಿ ಕಾಲೇಜಿನಲ್ಲಿ ನಡೆದ ಬಿ.ಎ, ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಶೇಷ ಉದ್ಯಮಶೀಲತೆ ಮೂರು ದಿನಗಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇಶ ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳಲ್ಲಿ ಪ್ರಮುಖವಾದ ಬಡತನ, ನಿರುದ್ಯೋಗ ನಿರ್ಮೂಲನೆಗೆ ಉದ್ಯಮಶೀಲತೆ ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.