‘ನಾವು ಸಿನಿಮಾದಲ್ಲಿ ಪಾತಕಗಳನ್ನು ವೈಭವೀಕರಿಸಿಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂಬ ಸಂದೇಶವನ್ನೂ ಸಿನಿಮಾದಲ್ಲಿ ನೀಡಿದ್ದೇವೆ’ ಎನ್ನುವುದರ ಜತೆಗೇ ‘ಒಬ್ಬ ವ್ಯಕ್ತಿ ಎಲ್ಲವನ್ನೂ ಸಹಿಸಿಕೊಂಡಿದ್ದರೆ ಅದು ಕೊನೆಗೊಮ್ಮೆ ಆಕ್ರೋಶವಾಗಿ ಸ್ಫೋಟಗೊಳ್ಳುತ್ತದೆ ಎಂಬುದನ್ನೂ ತೋರಿಸಿದ್ದೇವೆ’ ಎಂದರು. ಅಂದಹಾಗೆ, ಈ ಚಿತ್ರದ ಕಥೆ–ಚಿತ್ರಕಥೆ–ನಿರ್ದೇಶನ ಎಲ್ಲವೂ ವೆಂಕಟ್ ಅವರದೇ.