ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವ ಹಕ್ಕಿಲ್ಲವೇ?

Last Updated 20 ಏಪ್ರಿಲ್ 2017, 19:25 IST
ಅಕ್ಷರ ಗಾತ್ರ

ಸೇನೆಯಲ್ಲಿ ನೀಡುವ ಆಹಾರದ ಗುಣಮಟ್ಟದ ಬಗ್ಗೆ  ಪ್ರಶ್ನೆ ಮಾಡಿದ ಯೋಧ ತೇಜಬಹದ್ದೂರ್ ಅವರನ್ನು ಸೇನೆ ಸೇವೆಯಿಂದ ವಜಾ ಮಾಡಿದೆ.
ಆಹಾರದ ಗುಣಮಟ್ಟದ ಬಗ್ಗೆ ತೇಜಬಹದ್ದೂರ್‌ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೊ ಪ್ರಸಾರ ಮಾಡಿದ್ದರಿಂದ ಸೇನೆಗೆ ಮುಜುಗರ ಉಂಟಾದಂತೆ ಕಾಣಿಸುತ್ತದೆ.

ಸೇನೆಯ ಈ ನಡೆಯಿಂದ  ಯೋಧರು ಪ್ರಶ್ನಿಸುವ ಹಕ್ಕನ್ನೆ  ಹೊಂದಿಲ್ಲ ಹಾಗೂ ಮುಂದೆ ಈ ರೀತಿ ಯಾರೂ ಟೀಕೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದಂತಾಗಿದೆ.

ಪತ್ರ, ಟ್ವೀಟ್‌ ಮುಂತಾದ ಮಾಧ್ಯಮಗಳ ಮೂಲಕ ಸಲ್ಲಿಸಿದ ಸಣ್ಣಪುಟ್ಟ ಕೋರಿಕೆಗಳಿಗೂ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಕರಣ ಕಾಣಲಿಲ್ಲವೇ?

ದೇಶದ ಆದಾಯದ ಬಹುಪಾಲನ್ನು ರಕ್ಷಣೆಗೆ ವ್ಯಯಿಸುವ ಸರ್ಕಾರ, ಸೈನಿಕರಿಗೆ ಗುಣಮಟ್ಟದ ಆಹಾರ ನೀಡಲು ವ್ಯವಸ್ಥೆ ಮಾಡಬಾರದೇ ?
ಸೈನಿಕರಿಗೆ ಇನ್ನೂ ‘ಅಚ್ಛೇ ದಿನ್’ ಬಂದಿಲ್ಲ ಎಂದರೆ ದುರಂತವೇ ಸರಿ...!
-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT