ಸೇನೆಯಲ್ಲಿ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ ಯೋಧ ತೇಜಬಹದ್ದೂರ್ ಅವರನ್ನು ಸೇನೆ ಸೇವೆಯಿಂದ ವಜಾ ಮಾಡಿದೆ.
ಆಹಾರದ ಗುಣಮಟ್ಟದ ಬಗ್ಗೆ ತೇಜಬಹದ್ದೂರ್ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೊ ಪ್ರಸಾರ ಮಾಡಿದ್ದರಿಂದ ಸೇನೆಗೆ ಮುಜುಗರ ಉಂಟಾದಂತೆ ಕಾಣಿಸುತ್ತದೆ.
ಸೇನೆಯ ಈ ನಡೆಯಿಂದ ಯೋಧರು ಪ್ರಶ್ನಿಸುವ ಹಕ್ಕನ್ನೆ ಹೊಂದಿಲ್ಲ ಹಾಗೂ ಮುಂದೆ ಈ ರೀತಿ ಯಾರೂ ಟೀಕೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದಂತಾಗಿದೆ.
ಪತ್ರ, ಟ್ವೀಟ್ ಮುಂತಾದ ಮಾಧ್ಯಮಗಳ ಮೂಲಕ ಸಲ್ಲಿಸಿದ ಸಣ್ಣಪುಟ್ಟ ಕೋರಿಕೆಗಳಿಗೂ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಕರಣ ಕಾಣಲಿಲ್ಲವೇ?
ದೇಶದ ಆದಾಯದ ಬಹುಪಾಲನ್ನು ರಕ್ಷಣೆಗೆ ವ್ಯಯಿಸುವ ಸರ್ಕಾರ, ಸೈನಿಕರಿಗೆ ಗುಣಮಟ್ಟದ ಆಹಾರ ನೀಡಲು ವ್ಯವಸ್ಥೆ ಮಾಡಬಾರದೇ ?
ಸೈನಿಕರಿಗೆ ಇನ್ನೂ ‘ಅಚ್ಛೇ ದಿನ್’ ಬಂದಿಲ್ಲ ಎಂದರೆ ದುರಂತವೇ ಸರಿ...! -ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ