ದೃಶ್ಯ ಮಾಧ್ಯಮಗಳಲ್ಲಿ ಕೆಲವೊಮ್ಮೆ ಮುಖ್ಯಮಂತ್ರಿ ಕುರಿತಂತೆ ‘ನಾಡ ದೊರೆ’, ‘ನಾಡ ಪ್ರಭು’ ಎಂದೋ ‘ರಾಜ್ಯ ಆಳಿದವರು’ ಎಂದೋ, ಕೆಲವು ನಾಯಕರ ಬಗ್ಗೆ ‘ಯುವರಾಜ’ ಎಂದೋ ಅತಿರಂಜಿತವಾಗಿ ವರದಿ ಮಾಡಲಾಗುತ್ತದೆ. ಈ ರೀತಿಯ ‘ಅಕ್ಷರ ಅರಸೊತ್ತಿಗೆ’ಯೂ ಕೊನೆಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ‘ಪ್ರಜೆಯೇ ಪ್ರಭು’ವಾಗಿದ್ದು ಎಲ್ಲರೂ ಅವರ ಸೇವಕರೇ ಎಂಬುದನ್ನ ಮನಗಾಣಬೇಕಿದೆ.
-ಪ್ರಶಾಂತ ಎಂ. ಕುನ್ನೂರ, ಜೇವರಗಿ