ಸಾಸ್ವೆಹಳ್ಳಿ ಬ್ಲಾಕ್ ಅಧ್ಯಕ್ಷ ಎ.ಎಸ್.ಶಿವಲಿಂಗಪ್ಪ ಮಾತನಾಡಿ, ‘ಮೇ 3ರಂದು ಹೊನ್ನಾಳಿಯ ಗುರುಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆ ಆಯೋಜಿಸಲಾಗಿದೆ. ಪಕ್ಷದ ಅಭಿಮಾನಿಗಳು, ನೆರೆಯ ಪಕ್ಷಗಳ ಮುಖಂಡರು ಭಾಗವಹಿಸಬೇಕು’ ಎಂದು ಕೇಳಿಕೊಂಡರು.ಪ್ರಚಾರ ಸಮಿತಿ ಅಧ್ಯಕ್ಷ ಶಿವಮೂರ್ತಿ ಗೌಡ, ಪ್ರಧಾನ ಕಾರ್ಯದರ್ಶಿ ಕೆ.ಎಲ್.ವೀರೇಶರಾವ್ ಮಾತನಾಡಿದರು. ಪಕ್ಷದ ಮುಖಂಡರಾದ ಗುರುಬಸಪ್ಪ, ಇಕ್ಬಾಲ್, ರಮೇಶ್ ನಾಯ್ಕಾ, ಪರಮೇಶಪ್ಪ ಹಾಗೂ ಕಾರ್ಯಕರ್ತರು ಇದ್ದರು.