ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಮೇವಿನ ಕೊರತೆಯಿದೆ. ಇಲ್ಲಿಗೆ ಮೇವು ಪೂರೈಕೆಗಾಗಿ ಗುತ್ತಿಗೆ ನೀಡಿದ್ದ ವ್ಯಕ್ತಿ ಕೈಕೊಟ್ಟಿದ್ದಾನೆ. ಆದರೂ ತಹಶೀಲ್ದಾರ್ ಮಲ್ಲಿಕಾರ್ಜುನ್, ದೂರದ ಯಾದಗಿರಿಯಿಂದ ಮೇವು ತರಿಸಿ ವಿತರಿಸುತ್ತಿದ್ದಾರೆ. ಅವರ ಶ್ರಮ ನಿಜಕ್ಕೂ ಅಭಿನಂದನೀಯ’ ಎಂದರುತಹಶೀಲ್ದಾರ್ ಮಲ್ಲಿಕಾರ್ಜುನಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ನರಸಿಂಹರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಠದಕುರುಬರಹಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆನಂದ್, ತಾಲ್ಲೂಕು ಪಂಚಾಯ್ತಿ ಸದಸ್ಯ ಪರಮೇಶ್, ಸೀಬಾರ ಗ್ರಾಮದ ಪ್ರಕಾಶ್, ಕಲ್ಲೇಶಯ್ಯ, ಎಸ್.ಎನ್.ಸ್ಮಾರಕಟ್ರಸ್ಟ್ನ ಕೆಇಬಿ ಷಣ್ಮುಖಪ್ಪ, ಮುರುಘಾಮಠದ ವ್ಯವಸ್ಥಾಪಕ ಎ.ಜೆ.ಪರಮಶಿವಯ್ಯ, ಎಂ.ಜಿ. ದೊರೆಸ್ವಾಮಿ, ಷಡಾಕ್ಷರಯ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.