ಸಾಮಾನ್ಯ ಸಭೆ ನಡೆಸಿ 21 ನಿರ್ಣಯ ಗಳನ್ನು ಅಂಗೀಕರಿಸಿದ್ದು ಕಾನೂನು ಬಾಹಿರ’ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿ ದ್ದರು. ಬಳಿಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಗರ ಯೋಜನಾ ನಿರ್ದೇಶಕರು, ‘ಆಯುಕ್ತರು ಪುರಸಭೆ ಕಾಯ್ದೆಯನ್ನು ಉಲ್ಲಂಘಿಸಿ ಸಭೆ ನಡೆಸಿದ್ದಾರೆ. ಅಂದು ಕೈಗೊಂಡ ನಿರ್ಣಯಗಳನ್ನು ರದ್ದುಪಡಿಸ ಬಹುದು. 24 ಗಂಟೆಯೊಳಗೆ ಸಮಜಾ ಯಿಷಿ ನೀಡುವಂತೆ ಕಾರಣ ಕೇಳಿ ನೋಟಿಸು ಜಾರಿ ಮಾಡಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕ್ರಮ ಕ್ಕಾಗಿ ಜಿಲ್ಲಾಧಿಕಾರಿಗೆ ಕಡತ ರವಾನಿ ಸಿದ್ದಾರೆ. ‘ಕಾನೂನು ರಕ್ಷಣೆಯಲ್ಲಿ ಅಧಿಕಾರಿ ಗಳು ವಿಫಲ ರಾಗಿದ್ದಾರೆ. ಪ್ರಾದೇಶಿಕ ಆಯುಕ್ತರಿಗೆ ದಾಖಲೆಗಳ ಸಮೇತ ದೂರು ನೀಡುತ್ತೇನೆ’ ಎಂದು ಬಿಜೆಪಿಯ ಸದಸ್ಯ ವಸಂತ ಸುರಪುರಕರ್ ‘ಪ್ರಜಾವಾಣಿ’ಗೆ ತಿಳಿಸಿದರು.