ಬಳಿಕ ಉಬಯ ಜಾತಿ ಮುಖಂಡರ ಸಭೆ ನಡೆಸಿದ ತಹಶೀಲ್ದಾರ್ ಚಂದ್ರಕಾಂತ್, ನಾಮಫಲಕ ಅಳವಡಿಸಲು ಎರಡು ಪ್ರತ್ಯೇಕ ಸ್ಥಳ ನಿಗದಿ ಮಾಡಿದರು. ಆದರೆ ಇದಕ್ಕೂ ಸಭೆಯಲ್ಲಿ ಸಹಮತ ಮೂಡಲಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಸಭೆ ಮುಂದೂಡಲಾಯಿತು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ಮುಖಂಡರಾದ ಶ್ರೀನಿವಾಸ, ಸಿದ್ದಪ್ಪ, ಹನುಮೇಶ ಕುಂಟೋಜಿ, ಮರಿಯಪ್ಪ, ಅಯ್ಯಪ್ಪ, ಭೀಮಪ್ಪ ಹೊಸಮನಿ, ಮಾರ್ಕಂಡಯ್ಯ, ವಿರೂಪಾಕ್ಷಪ್ಪ ರೇಷ್ಮೆ, ಮೋರಿ ದುರುಗಪ್ಪ, ಯಂಕಪ್ಪ ಇದ್ದರು.