ಕಲಾವಿದರಾಗಿ 25 ವರ್ಷ ಸೇವೆ ಸಲ್ಲಿಸಿದವರು ಮಾಸಾಶನ ಪಡೆಯಬಹುದು. ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಇಲಾಖೆ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಹಿರಿಯ ಕಲಾವಿದ ಡಾ. ಕಾಶಿನಾಥ ಕುಕನೂರ ಚಾಲನೆ ನೀಡಿದರು. ಎಪಿಎಂಸಿ ಅಧ್ಯಕ್ಷ ರಾಮಣ್ಣ ಪ್ರಭಣ್ಣವರ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯಶಾಸ್ತ್ರಿ ಭಿಕ್ಷಾವತಿಮಠ ಸಾನಿಧ್ಯ ವಹಿಸಿದ್ದರು. ಶರಣಪ್ಪಗೌಡ ಪೊಲೀಸ್ಪಾಟೀಲ, ಸಿದ್ದಯ್ಯ ಬಿಜಕಲ್ಲ, ತೊಂಡಿಹಾಳ ಹುಚ್ಚಪ್ಪಜ್ಜ, ಬಸವರಾಜ ಉಳ್ಳಾಗಡ್ಡಿ, ಶರಣಪ್ಪ ಹಿರೇಮನಿ, ವ್ಯವಸ್ಥಾಪಕ ಕಾಶಯ್ಯ ನಂದಿಕೋಲಮಠ, ಬಸವರಾಜ ಸಂಗಟಿ ಇದ್ದರು.ಶೇಖಪ್ಪ ಮಾನಶೆಟ್ಟಿ, ವೀರಭದ್ರಯ್ಯ ಕೆಂಭಾವಿಮಠ, ಮೈಲಾರಗೌಡ ತೊಂಡಿಹಾಳ ಸಂಗೀತ ಕಾರ್ಯಕ್ರಮ ನೀಡಿದರು. ಗಂಗಪ್ಪ ಹವಳೆ ಸ್ವಾಗತಿಸಿದರು.ಸಿ.ಎಸ್.ಗೊಂಗಡಶೆಟ್ಟಿ ವಂದಿಸಿದರು. ವಿರೂಪಾಕ್ಷಪ್ಪ ಉಳ್ಳಾಗಡ್ಡಿ ನಿರೂಪಿಸಿದರು.