‘ಕುಷ್ಟಗಿ, ಗಜೇಂದ್ರಗಡ ತಾಲ್ಲೂಕು ಗಳಲ್ಲಿ ಮಳೆಯಾದರೆ ಮಾತ್ರ ಜಲಾಶಯಕ್ಕೆ ನೀರು ಬರುತ್ತಿದೆ. ಮಳೆ ಕೊರತೆಯಿಂದಾಗಿ ಜಲಾಶಯ ತುಂಬ ಲಿಲ್ಲ. ಅಲ್ಲದೆ ಜಲಾಶಯ ಬರಿದಾ ಗಿದ್ದರಿಂದ ಯೋಜನೆ ವ್ತಾಪ್ತಿಯ ಮಾರಲದಿನ್ನಿ, ಉಸ್ಕಿಹಾಳ, ಕಾಟಗಲ್, ಬೆಲ್ಲದಮರಡಿ, ದಿಗ್ಗನಾಯಕಭಾವಿ ಸೇರಿ ದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾ ಗಿದೆ. ಈ ಭಾಗದ ಜಾನುವಾರು ಗಳಿಗೂ ಕುಡಿ ಯಲು ನೀರಿಲ್ಲದಂತಾಗಿದೆ’ ಎಂದರು.
ಜಲಾಶಯ ಬರಿದಾಗಿರುವುದರಿಂದ ಹೂಳು ತೆಗೆಸಲು ಸರ್ಕಾರ ಮುಂದಾ ಗಬೇಕು. ಇದರಿಂದ ಮುಂದಿನ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.