‘ಕಿರಾಳಮ್ಮ ದೇವಿ ರಥೋತ್ಸವ ಸಂದರ್ಭದಲ್ಲೂ ಪಂಚಾಯಿತಿ ಕಾಮಗಾರಿ ನೆಪ ಮಾಡಿ ನಳದ ಮೂಲಕ ನೀರು ನೀಡಲಿಲ್ಲ. ಇಂದಿಗೂ ನಾವು ₹ 200 ಪಾವತಿಸಿ, ಖಾಸಗಿಯವರಿಂದ ಸಿಂಟೆಕ್ಸ್ ನೀರು ಕೊಳ್ಳುತ್ತಿದ್ದೇವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ಅನುಕೂಲ ಮಾಡಿಕೊಡುವಂತೆ ಪಿಡಿಒ ಮತ್ತು ಜಿಲ್ಲಾ ಪಂಚಾಯಿತಿ ದೂರು ನೀಡಲು ಇರುವ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಸಂಬಂದಪಟ್ಟ ವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಬೇಕು’ ಎಂದು ನಿವಾಸಿ ಮೂರ್ತಿ ಒತ್ತಾಯಿಸಿದ್ದಾರೆ.