‘ನೂತನ ಪಿಂಚಣಿ ಯೋಜನೆ ಯಿಂದಾಗಿ ಈ ಬಾರಿ ಸಾವಿರಕ್ಕೂ ಹೆಚ್ಚು ಅನುದಾನಿತ ಶಾಲಾ ನೌಕರರು ಪಿಂಚಣಿ ರಹಿತವಾಗಿ ನಿವೃತ್ತರಾಗಲಿದ್ದಾರೆ. ಅನು ದಾನಿತ ನೌಕರರ ಸಮಸ್ಯೆಗಳ ಬಗ್ಗೆ 11 ವರ್ಷಗಳಿಂದ ಹೋರಾಟ ನಡೆಸುತ್ತಿ ದ್ದರೂ, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.‘2006ರ ನೂತನ ಪಿಂಚಣಿ ಯೋಜನೆಯು ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಅನ್ವಯಿಸುತ್ತಿಲ್ಲ. ಹೀಗಾಗಿ, ಅನುದಾನಿತ ನೌಕರರ ಭವಿ ಷ್ಯಕ್ಕೆ ಭದ್ರತೆ ಇಲ್ಲದಾಗಿದೆ. ಅದಕ್ಕಾಗಿ ಹಳೇ ಪಿಂಚಣಿ ಯೋಜನೆ ಜಾರಿಯ ಜೊತೆಗೆ, ಸಂಸ್ಥೆ ಅನುದಾನಕ್ಕೆ ಒಳ ಪಡುವ ಮೊದಲಿನ ಸೇವೆಯನ್ನೂ ಕೂಡ ಕಡ್ಡಾಯವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.