ಹಾನಗಲ್: ತಾಲ್ಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ರೈತಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕವನ್ನು ಮಂಗಳವಾರ ಉದ್ಘಾಟಿಸಲಾಯಿತು.ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ, ‘ಅತಿವೃಷ್ಟಿ–ಅನಾವೃಷ್ಟಿ ರೈತರ ಬದುಕು ನಿತ್ರಾಣಗೊಳಿಸಿದೆ. ಜನಪ್ರತಿನಿಧಿಗಳು ಕೃಷಿಯ ಗೋಳು ಅರಿತು ಯೋಜನೆ ಗಳನ್ನು ಜಾರಿಗೆ ತರಬೇಕು, ರೈತ ಆತ್ಮಹತ್ಯೆ ಘಟನೆಗಳು ನಿಲ್ಲಬೇಕು, ರೈತ ಸಂಘಟನೆಯು ಕೃಷಿಯಲ್ಲಿನ ಸಮಸ್ಯೆ ಗಳನ್ನು ಮೆಟ್ಟಿ ನಿಲ್ಲುವ ವ್ಯವಸ್ಥೆಯಾಗಿ ಬೆಳೆಯಬೇಕು’ ಎಂದರು.