ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಸಂಘ, ಹಸಿರುಸೇನೆ ಗ್ರಾಮ ಘಟಕ ಉದ್ಘಾಟನೆ

Last Updated 21 ಏಪ್ರಿಲ್ 2017, 8:31 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ರೈತಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕವನ್ನು ಮಂಗಳವಾರ ಉದ್ಘಾಟಿಸಲಾಯಿತು.ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ, ‘ಅತಿವೃಷ್ಟಿ–ಅನಾವೃಷ್ಟಿ ರೈತರ ಬದುಕು ನಿತ್ರಾಣಗೊಳಿಸಿದೆ. ಜನಪ್ರತಿನಿಧಿಗಳು ಕೃಷಿಯ ಗೋಳು ಅರಿತು ಯೋಜನೆ ಗಳನ್ನು ಜಾರಿಗೆ ತರಬೇಕು, ರೈತ ಆತ್ಮಹತ್ಯೆ ಘಟನೆಗಳು ನಿಲ್ಲಬೇಕು, ರೈತ ಸಂಘಟನೆಯು ಕೃಷಿಯಲ್ಲಿನ ಸಮಸ್ಯೆ ಗಳನ್ನು ಮೆಟ್ಟಿ ನಿಲ್ಲುವ ವ್ಯವಸ್ಥೆಯಾಗಿ ಬೆಳೆಯಬೇಕು’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತ ನಾಡಿ, ‘ರೈತ ಸಂಘಟನೆ ಬಲಗೊಳ್ಳ ಬೇಕು, ಕೃಷಿಕ್ಷೇತ್ರವನ್ನು ಹೀನಾಯವಾಗಿ ಕಾಣುವುದೇ ಸರ್ಕಾರಗಳ ನೀತಿಯಾ ಗಿದೆ. ಕೃಷಿ ಪ್ರಧಾನವಾದ ಈ ದೇಶದ ಪ್ರಗತಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಅಡಗಿದೆ ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯ ಬೇಕು’ ಎಂದರು. ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT