ದೇಶದ ಸ್ವಾತಂತ್ರ್ಯ ಪೂರ್ವದ ಇತಿಹಾಸಕ್ಕಿಂತ ಸ್ವಾತಂತ್ರ್ಯಾನಂತರದ ಇತಿಹಾಸ ಭಯಾನಕವಾಗಿದೆ ಎಂದರು.ಸಂಸದ ಅನಂತಕುಮಾರ್ ಹೆಗಡೆ ಮಾತನಾಡಿ, ಹಳ್ಳಿಯ ಬದುಕು ಮಹತ್ವ ಹೊಂದಿದೆ. ಹಳ್ಳಿಯ ಬದುಕಿನಲ್ಲಿ ಸಾತ್ವಿಕ ಆಚರಣೆ ಇದ್ದು, ಅವುಗಳು ಇಂದು ಮರೆಯಾಗುತ್ತಿವೆ ಎಂದರು.ಸ್ಥಳೀಯ ಗಣ್ಯರಾದ ಕಮಲಾಕರ ಹೆಗಡೆ ಹುಕ್ಲಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಮಾತನಾಡಿದರು. ಕೃತಿಕಾರ ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ ಪುಸ್ತಕದ ಕುರಿತು ವಿವರಣೆ ನೀಡಿದರು. ವಿದ್ವಾಂಸ ಚಂದ್ರಶೇಖರ ಭಟ್ಟ ಗಾಳೀಮನೆ, ಹಿರಿಯ ಸಾಹಿತಿ ಆರ್.ಪಿ.ಹೆಗಡೆ, ಗೋಪಾಲಕೃಷ್ಣ ಹೆಗಡೆ ಕುಮಟಾ, ಶ್ರೀನಿವಾಸ ಬೆಂಗಳೂರು ಇದ್ದರು.