ನಿರಾಪೇಕ್ಷಣಾ ಪತ್ರ ನೀಡಲು ₹ 15,000 ನೀಡುವಂತೆ ಪರಿಸರ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಹೊನ್ನಾವರದ ಶ್ರೀನಿವಾಸ್ ಬುಧವಾರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಮಂಡಳಿಯ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಶ್ರೀನಿವಾಸರಿಂದ ₹ 12,000 ಲಂಚ ಪಡೆದ ಸುಗಂಧ ಕುರಿ ಅವರು ಆ ಹಣವನ್ನು ಭದ್ರತಾ ಸಿಬ್ಬಂದಿಗೆ ನೀಡಿದರು.