ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ತಾಲ್ಲೂಕು ಪಂಚಾಯಿತಿ ಇಒ ಬಿ.ಮಲ್ಲಾನಾಯ್ಕ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರಿಂದ ಮೊತ್ತ ದುರ್ಬಳಕೆ ಕುರಿತಂತೆ ಮಾಹಿತಿ ಪಡೆಯಲಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಅವರ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ತಹಶೀಲ್ದಾರ್ ಆನಂದಪ್ಪ ನಾಯಕ, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಪ್ರಭಾಕರ ಶೆಟ್ಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖಾಜಬನ್ನಿ, ಸದಸ್ಯರಾದ ಬ್ಯಾಟಿ ನಾಗರಾಜ, ಮಾಗಳ ನಿಂಗಪ್ಪ, ಸೋಬಟಿ ಭೀಮಪ್ಪ, ಎಸ್.ವೀರೇಶ, ಫಕ್ಕೀರಪ್ಪ, ಕೆ.ಹನುಮಂತಪ್ಪ, ಮುಖಂಡರಾದ ಆರ್.ವೆಂಕಟೇಶ್, ಶರಣಯ್ಯ, ಗಿಡ್ಡಪ್ಪ, ಕೇಶಪ್ಪ, ಅಂಜಿನಪ್ಪ, ಕೆ.ಶಿವರಾಮ, ದೊಡ್ಡಬಸವರಾಜ, ವಿಶ್ವನಾಥ ಹಾಜರಿದ್ದರು.