ಬಿ.ಪಿ.ಎಲ್. ಕಾರ್ಡುದಾರರಿಗೆ ಕೊಡುವ ಅಕ್ಕಿಯನ್ನು ಈ ತಿಂಗಳಲ್ಲಿ 7 ಕೆ.ಜಿ.ಗೆ ಹೆಚ್ಚಿಸಿ ಸರ್ಕಾರ ಅನುಕೂಲ ಮಾಡಿದೆ.
ಆದರೆ ಪ್ರತೀ ಸಾರಿ ಕಾರ್ಡುದಾರರಿಗೆ ಕೊಡುತ್ತಿದ್ದ ತಾಳೆ ಎಣ್ಣೆ ಹಾಗೂ ಉಪ್ಪಿನ ಪ್ಯಾಕೆಟ್ಅನ್ನು ವಿತರಿಸಿರುವುದಿಲ್ಲ. ಇದರಿಂದಾಗಿ ಅಕ್ಕಿ ಪ್ರಮಾಣ ಹೆಚ್ಚಿಸಿದ್ದರಿಂದ ತಾಳೆ ಎಣ್ಣೆ ಹಾಗೂ ಉಪ್ಪಿನ ಪ್ಯಾಕೆಟ್ ವಿತರಣೆ ನಿಲ್ಲಿಸಲಾಗಿದೆ ಎಂಬ ಅಭಿಪ್ರಾಯ ಮೂಡುವಂತಾಗಿದೆ.
ಸರ್ಕಾರ ಮೊದಲಿನಂತೆ ಅಕ್ಕಿ ಜತೆ ಎಣ್ಣೆ ಹಾಗೂ ಉಪ್ಪಿನ ಪ್ಯಾಕೆಟ್ ವಿತರಿಸಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. -ಪಾಂಡೋಮಟ್ಟಿ ಶಿವಮೂರ್ತಿ,ಚನ್ನಗಿರಿ