‘ಎಷ್ಟೇ ಮಂದಿ ನನ್ನ ಬಳಿ ಶಿಫಾರಸಿಗೆ ಬಂದರೂ, ನಾ ಯಾರ ಪರವೂ ಪತ್ರ ನೀಡಲ್ಲ. ಪ್ರಭಾವಿಗಳ ಬಳಿ ಬೆಗ್ ಮಾಡಿ ಕುಲಪತಿಯಾಗೋದು ನಾಚಿಕೆಗೇಡಿನ ಸಂಗತಿ. ನಾನಂತೂ ಸಚಿವ ಸ್ಥಾನ ಪಡೆಯಲು ಯಾರ ಬಳಿಯೂ ಭಿಕ್ಷೆ ಬೇಡಲಿಲ್ಲ... ಅದಕ್ಕೆ ಯಾವ ಲಾಬಿಗೂ ಮಣಿಯಲ್ಲ.
ನನ್ನ ಅಧಿಕಾರದ ಅವಧಿಯಲ್ಲೇ ರಾಜ್ಯದ ಎಲ್ಲ ವಿ.ವಿ.ಗಳಿಗೆ ಒಂದೇ ನಿಯಮಾವಳಿಯಡಿ, ಮೆರಿಟ್ ಆಧಾರದಲ್ಲಿ ನೇಮಕಾತಿ ವ್ಯವಸ್ಥೆ ಅನುಷ್ಠಾನಗೊಳಿಸುವೆ’ ಎಂದು ರಾಯರೆಡ್ಡಿ ಪ್ರಸ್ತಾಪಿಸುತ್ತಿದ್ದಂತೆ, ವೇದಿಕೆ ಮುಂಭಾಗ ಆಸೀನರಾಗಿದ್ದ ಪದವೀಧರರು ಸಂತಸ ವ್ಯಕ್ತಪಡಿಸಿದರೆ, ಕೆಲವರು ಪೆಚ್ಚು ಮೋರೆ ಹಾಕಿದರು!