8 ಎಕರೆ ಕಬ್ಬು, 5 ಎಕರೆ ತೊಗರಿ, 1 ಎಕರೆ ಚೆಂಡುಹೂ ಹಾಗೂ ಉಳಿದ ಹೊಲದಲ್ಲಿ ಶೇಂಗಾ, ಈರುಳ್ಳಿ, ಮೇಣಸಿನಕಾಯಿ ಬೆಳೆದಿದ್ದಾರೆ. ಈವರ್ಷ 35 ಕ್ವಿಂಟಲ್ ತೊಗರಿ ಬಂದಿದೆ. 50 ಕ್ವಿಂಟಲ್ ಈರುಳ್ಳಿ, 10 ಕ್ವಿಂಟಲ್ ಮೇಣಸಿನಕಾಯಿಯೂ ಲಾಭ ತಂದಿದೆ. ಜಮೀನಿಗೆ ₹2 ಲಕ್ಷ ವೆಚ್ಚ ಮಾಡಿ ತಂತಿ ಬೇಲಿ ನಿರ್ಮಿಸಿದ್ದಾರೆ. ‘ಕಬ್ಬು ಮತ್ತು ತರಕಾರಿಗೆ ತುಂತುರು ನೀರಾವರಿ ಸೌಲಭ್ಯ ಕಲ್ಪಿಸಿದ್ದೇನೆ. ಮಿಶ್ರ ಬೆಳೆಯಿಂದ ಅಧಿಕ ಇಳುವರಿ ಮತ್ತು ಲಾಭ ಪಡೆಯಬಹುದು’ ಎಂದು ಯುವರೈತ ವಿಷ್ಣು ಮಹೇಂದ್ರಕರ್ ತಿಳಿಸಿದರು.ವಿಷ್ಣು ಅವರ ಸಂಪರ್ಕ ಸಂಖ್ಯೆ 97421 62909