‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಧಿಕಾರ ಬೇಕಿದ್ದರೆ ಸಾಯಲಿ’ ಎಂದು ರಾಯರಡ್ಡಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಆಕಾಶ ಪಾಟೀಲಹೇಳಿದರು.‘ರಾಯರಡ್ಡಿ ಅವರು ಮೋದಿ ಬಗೆಗೆ ನೀಡಿರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮನ್ಮಥ ಕಾಡವಾದ, ಕಾರ್ಯದರ್ಶಿ ಬಸವರಾಜ ಪಿ. ಭತಮುರ್ಗೆ, ಬಿಜೆಪಿ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಜನಾರ್ಧನ ರೆಡ್ಡಿ ಆಣದೂರು, ಕಿರಣರೆಡ್ಡಿ, ಸಂತೋಷ, ಭೀಮು ಮೈಲೂರಕರ್ ಪಾಲ್ಗೊಂಡಿದ್ದರು.