ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಬಸವರಾಜ ಚಿರಡೆ ಮಾತನಾಡಿ, ‘ಹಾಮುನಗರ, ಮೈಸಲಗಾ, ಗಣಪತತಾಂಡಾ, ಶಿರೂರಿ, ಶಿರೂರಿವಾಡಿ, ಯಲ್ಲದಗುಂಡಿ, ಹುಲಸೂರನ ಪರಿಶಿಷ್ಟ ಜಾತಿಯವರ ಓಣಿ, ಚಿಕ್ಕನಾಗಾಂವ, ಬಾಗಹಿಪ್ಪರ್ಗಾ, ರಾಮನಗರತಾಂಡಾ, ಬೆಟಬಾಲ್ಕುಂದಾ, ಮಂಠಾಳ, ಹಂದ್ರಾಳ, ಏಕಂಬಾ, ಯರಂಡಿ, ಚಿತ್ತಕೋಟಾ, ಲಾಡವಂತಿ, ಪ್ರತಾಪುರ, ತಡೋಳಾ, ಕಿಟ್ಟಾ ಮುಂತಾದೆಡೆ ಕೊಳವೆಬಾವಿ ಕೊರೆಯಲು ಮತ್ತು ವಿವಿಧ ಕಾರಣಗಳಿಂದ ಉಂಟಾದ ನೀರಿನ ಸಮಸ್ಯೆ ಬಗೆಹರಿಸಲು ಅನುದಾನ ಬಿಡುಗಡೆಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ತಿಳಿಸಿದರು.