ಅಭಿವೃದ್ಧಿಯ ನೆಪದಲ್ಲಿ ಅವೈಜ್ಞಾನಿಕ ಹಾಗೂ ಪ್ರಕೃತಿಗೆ ವಿರುದ್ಧವಾಗಿ ಮಾನವನ ಚಟುವಟಿಕೆ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ಕಾಡೆಲ್ಲ ನಾಶವಾಗಿ ಉಷ್ಣತೆ ಹೆಚ್ಚಳವಾಗುತ್ತದೆ. ಈ ಭೂಮಿ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕೂ ಮುನ್ನ ಮನುಷ್ಯ ಎಚ್ಚೆತ್ತುಕೊಳ್ಳಬೇಕು ಎಂದರು.ನ್ಯಾಯಾಧೀಶ ಕೆ.ಗೋಕುಲ್, ವಕೀಲರ ಸಂಘದ ಅಧ್ಯಕ್ಷ ಜವಳಿ ನಾಗರಾಜ, ವಕೀಲರಾದ ಶರದ ದಂಡಿನ, ವಿಜಯಲಕ್ಷ್ಮಿ, ಪ್ರೇಮಮೂರ್ತಿ ಹಿರೇಮಠ, ಎಚ್. ಕನಕರಾಯ ಇದ್ದರು.