ಶಹಾಪುರ: ತಾಲ್ಲೂಕಿನ ಪಿಂಜಾರ ದೊಡ್ಡಿಯಲ್ಲಿ ಶನಿವಾರ ವಿದ್ಯುತ್ ಸ್ಪರ್ಶ ದಿಂದ ಇಮಾಮಸಾಬ್ ಎಂಬುವರ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು, ದವಸ ಧಾನ್ಯ, ₹1.11 ಲಕ್ಷ ನಗದು ಮತ್ತು 2 ತೊಲೆ ಬಂಗಾರ ಸುಟ್ಟು ಕರಕಲಾಗಿವೆ.ಉದ್ಯೋಗಕ್ಕೆ ಬೆಂಗಳೂರಿಗೆ ತೆರಳಿದ್ದ ಇಮಾಮ್ಸಾಬ್ ಕುಟುಂಬ ಸಮೇತ ಶನಿವಾರ ಸ್ವಗ್ರಾಮಕ್ಕೆ ಮರಳಿದ್ದರು. ಹಣ, ಚಿನ್ನ ಮತ್ತು ಅಗತ್ಯ ವಸ್ತುಗಳನ್ನು ಗುಡಿಸಲಿನಲ್ಲಿ ಇಟ್ಟಿದ್ದರು. ಬೆಂಕಿಯಿಂದ ಎಲ್ಲವೂ ಸುಟ್ಟು ಕರಕಲಾಯಿತು.