ಉಪ್ಪಿನಂಗಡಿ: ‘ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಬಿಟ್ಟು ದೇಶ ಉಳಿಯ ಲಾರದು. ಇವುಗಳೇ ಸುದೃಢ ಸಮಾಜದ ಮೂಲ ಬೇರುಗಳು. ಇಂತಹ ಬೇರಿಗೆ ಶಕ್ತಿ ನೀಡುವ ಕಾರ್ಯ ಶಿಶು ಮಂದಿರ ದಂತಹ ಸಂಸ್ಕಾರ ಕೇಂದ್ರಗಳಿಂದ ನಡೆಯಲಿದೆ’ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಶನಿವಾರ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನಂದಗೋಕುಲ ಶಿಶು ಮಂದಿರ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.