ದಾವಣಗೆರೆ: ಉತ್ತಮ ಹೋರಾಟದ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿ ಕೊಂಡ ಆರ್.ಬಿ.ಐನ ಜಹೀರ್ ಪಾಷಾ ಬೆಂಗಳೂರಿನ ಅರುಣ್ ಕುಮಾರ್ ಅವರನ್ನು ಸೋಲಿಸಿ, ರಾಜ್ಯ ರ್ಯಾಂಕಿಂಗ್ ಕೇರಂ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ರಾಜ್ಯ ಚಾಂಪಿಯನ್ ಸಹ ಆಗಿರುವ ಜಹೀರ್ ಗುರುಭವನದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ 6–20, 19–5, 25–11ರಿಂದ ಅರುಣ್ ಎದುರು ಜಯ ಗಳಿಸಿದರು. ದಾವಣಗೆರೆಯ ಶಿವ ಕುಮಾರ್, ಬೆಂಗಳೂರಿನ ವಿನೋದ್ ವಿರುದ್ಧ ಜಯಗಳಿಸಿ ಮೂರನೇ ಸ್ಥಾನ ಪಡೆದರು.